Sunday, October 2, 2016

ಕೂಲಿಗಾಗಿ ಕಾಳು


ಬಡವರು ಹೊಟ್ಟೆವರಿಯುವ
ಸಲುವಾಗಿ ಸರ್ಕಾರ
ತಂದಿದೆಯೊಂದು ಯೋಜನೆ
ಅದುವೇ
ಕೂಲಿಗಾಗಿ ಕಾಳು ಯೋಜನೆ

ಬಹುಪಾಲು ಹಳ್ಳಿಗಳಿಗೆ
ಇದರ ಗಂಧವೇ ಸೋಕಿಲ್ಲ
ತಿರುಗಾಡುತಿಹುದು
ಅಧಿಕಾರಿ ಬಳಗದಲ್ಲೆಲ್ಲ

ಉಸ್ತುವಾರಿಯನ್ನು
ಗುತ್ತಿಗೆದಾರ ಪಡೆವ
ಕೆಲಸಕ್ಕಾಗಿ
ಯಂತ್ರಗಳ ತರುವ

ಅಧ್ಯಯನ ತಂಡ
ಇಣುಕುವಾಗ
ನೆಪಮಾತ್ರಕೆ
ಕೂಲಿಯಾಳುಗಳ
ಕರೆತರುವ

ಕೂಲಿಗಾಗಿ ಕಾಳು
ಯೋಜನೆಯಲ್ಲವಿದು  
ಅಧಿಕಾರಿಗಾಗಿ
ಕಾಳು ಯೋಜನೆ

                                            --ಕವಿತಾ ಗೋಪಿಕುಂಟೆ 

No comments:

Post a Comment

Note: Only a member of this blog may post a comment.