ಬಡವರು ಹೊಟ್ಟೆವರಿಯುವ
ಸಲುವಾಗಿ ಸರ್ಕಾರ
ತಂದಿದೆಯೊಂದು ಯೋಜನೆ
ಅದುವೇ
ಕೂಲಿಗಾಗಿ ಕಾಳು ಯೋಜನೆ
ಬಹುಪಾಲು ಹಳ್ಳಿಗಳಿಗೆ
ಇದರ ಗಂಧವೇ ಸೋಕಿಲ್ಲ
ತಿರುಗಾಡುತಿಹುದು
ಅಧಿಕಾರಿ ಬಳಗದಲ್ಲೆಲ್ಲ
ಉಸ್ತುವಾರಿಯನ್ನು
ಗುತ್ತಿಗೆದಾರ ಪಡೆವ
ಕೆಲಸಕ್ಕಾಗಿ
ಯಂತ್ರಗಳ ತರುವ
ಅಧ್ಯಯನ ತಂಡ
ಇಣುಕುವಾಗ
ನೆಪಮಾತ್ರಕೆ
ಕೂಲಿಯಾಳುಗಳ
ಕರೆತರುವ
ಕೂಲಿಗಾಗಿ ಕಾಳು
ಯೋಜನೆಯಲ್ಲವಿದು
ಅಧಿಕಾರಿಗಾಗಿ
ಕಾಳು ಯೋಜನೆ
--ಕವಿತಾ ಗೋಪಿಕುಂಟೆ
No comments:
Post a Comment
Note: Only a member of this blog may post a comment.