Friday, September 30, 2016

ಗುಳೆ


ಬಂದಿಲ್ಲ ಮಳೆ
ಬಿತ್ತಿಲ್ಲ ಬೆಳೆ
ಬತ್ತಿಹುದು ತೊರೆ
ಹಿಂಗಿಹುದು ಕೆರೆ

ಬಂದಿಹುದು ಬರಗಾಲ
ತಂದಿಹುದು ಹಾಹಾಕಾರ
ಕುಡಿಯಲು ನೀರಿಲ್ಲ
ದನಕರುಗೆ ಮೇವಿಲ್ಲ

ಸರ್ಕಾರದವರು ಬಂದು
ಬರಪರಿಹಾರ ಘೋಷಿಸಿದರು
ಲಕ್ಷ ಲಕ್ಷ ನಿಧಿಯ
ಕಡತದಲ್ಲಿ ತೋರಿಸಿದರು

ಕಾಲುವೆಯ ದಾಹದಂತೆ
ಅಧಿಕಾರಿಗಳ ಧನದಾಹದಿ
ಹೆಸರಿಗೆ ಬಂದದ್ದು
ಕೈಗೆ ಬಾರದಾಗಿ
 
ಗಂಜಿಗಾಗಿ ಪರದಾಡಿ
ದನಕರುಗಳ ಮಾರಿ
ಹೊಲಮನೆಯ ಅಡವಿಟ್ಟು
ಸಾಲಗಾರನಾಗಿ

ಕಣ್ಣು ಬಾಯಿಬಿಟ್ಟು
ಪರಿಹಾರಕಾದು ಬೇಸರಿಸಿ
ವಿಧಿಯಿಲ್ಲದೆ ಹೊರಟಿಹನು
ನಮ್ಮ ರೈತ ಗುಳೆ

                                       --ಕವಿತಾ ಗೋಪಿಕುಂಟೆ 

No comments:

Post a Comment

Note: Only a member of this blog may post a comment.