Tuesday, May 26, 2015
Thursday, May 21, 2015
ಮತ್ತೆ ಮತ್ತೆ ಒಲವು
ಆ ಮೋಡಕೂ ರವಿಕಂಡು ಒಲವಾಗಿ
ಪ್ರೀತಿ ತುಸು ಹೆಚ್ಚಾಗಿ ಕಾರ್ಮೋಡವಾಗಿದೆ
ಇನಿಯನ ನೋಡುವ ಪುಳಕದಿ
ತಂಗಾಳಿ ಸೋಕಿ ಮನ ಹಗುರಾಗಿದೆ
ನಿಂತಲ್ಲಿ ನಿಲ್ಲದೆ ಕುಂತಲ್ಲಿ ಕೂರದೆ
ಅಲ್ಲೊಮ್ಮೆ ಇಲ್ಲೊಮ್ಮೆ ಹಾರಾಡಿದೆ
ಇನಿಯ ಕಂಡಾಕ್ಷಣ ಮೈ ರಂಗು
ಹೊನ್ನಾಗಿ ಸಂಭ್ರಮಿಸುತಿದೆ
ಸಂಭ್ರಮವ ಕಂಡು ಇಳೆಯಿಂದ
ನವಿಲು ನೃತ್ಯಗೈದು ತನ್ನ
ಕಾಲ್ಗೆಜ್ಜೆ ನಾದದಿ ಶುಭಾಷಯ ಕೋರಿದೆ
ರವಿಯು ಪ್ರೀತಿ ತಿರಸ್ಕರಿಸಿ ಕಾಣದಾದಾಗ
ಚಡಪಡಿಸಿ ಹುಸಿಕೋಪವ ಗುಡುಗು
ಮಿಂಚಾಗಿ ತೋರ್ಪಡಿಸಿ
ದುಃಖ ತಾಳಲಾರದೆ ಚಟಪಟ ಮಳೆಯಾಗಿ
ಬಿಕ್ಕಿ ಬಿಕ್ಕಿ ಅಳುತ್ತಾ ಇಳೆಗೆ ತಂಪೆರೆದಿದೆ
ಆದರೆ
ಈ ಕಣ್ಣೀರು ನಲ್ಲೆಯ ಒಲವ ಕರಗಿಸಿದೆ
ಇದ ಕಂಡ ಮಳೆಬಿಲ್ಲು ಸಪ್ತ ವರ್ಣಗಳರಡಿ
ಸಾಂತ್ವನ ಹೇಳಿ ಹೊಸಹುರುಪ ತಂದಿದೆ
ಹೊಸ ಹುರುಪಲಿ ಹೊಸ ಹರುಷದಿ
ಆ ಮೋಡಕೆ ಮತ್ತೆ ಮತ್ತೆ ಒಲವಾಗಿದೆ
ಇಂತಿ,
ಕವಿತಾ ಗೋಪಿಕುಂಟೆ
Wednesday, May 13, 2015
ಪುಟ ಕಾಣದ ಹಳೆ ಸರಕು
ಸದಾ ಜನ ಜಾತ್ರೆಯಂತಿದ್ದ ಮನ
ಸುಖಾ ಸುಮ್ಮನೆ ಒಮ್ಮೆಲೆ
ನೀರಸ ಮೌನದಿ
ಸಾಲು ಪರ್ವತಗಳೆಡೆಗೆ ಜಾರಿ ನಿಂತಿದೆ
ಒಬ್ಬಂಟಿಯಾದಾಗ ಧುಮ್ಮಿಕ್ಕುವ
ಕಹಿ ನೆನಪು, ಅನಾಥ ಭಾವಗಳು
ಪರ್ವತಗಳ ಮಧ್ಯೆ ತೊಯ್ದಾಡಿ ಪ್ರತಿಧ್ವನಿಸಿ
ಮತ್ತಷ್ಟು ಮೊಗದೊಷ್ಟು ಕುಗ್ಗಿಸುತಿವೆ ಮನವ
***********************************
ಅರಿವಿನ ಕಡಲ ಸೇರಲು
ಜ್ಞಾನದ ನದಿಯು
ಅಜ್ಞಾನದ ಕಟ್ಟೆಯೊಡೆದು ಹರಿಯಬೇಕು
***********************************
ನಮ್ಮ ಸಮಯದ ಹೂಡಿಕೆ ಗೊತ್ತಾಗುವುದು
ನಾವು ಓದಿದ ಪುಸ್ತಕಗಳ ಸಂಖ್ಯೆ ಮತ್ತು ನಾವು
ಮಾಡಿಕೊಂಡ ಹೊಸ ಸ್ನೇಹಿತರ ಸಂಖ್ಯೆಯಿಂದ.
ಹೂಡಿಕೆ ಸರಿಯೋ ತಪ್ಪೋ ಎಂದು ತಿಳಿಯುವುದು
ಆರಿಸಿಕೊಂಡ ಪುಸ್ತಕ ಮತ್ತು ಸ್ನೇಹಿತರಿಂದ.
***********************************
ಮಾಗಿಯ ಕಾಲದ ಮುಂಜಾವಿನಲಿ
ಗರಿಕೆಗೆ ಅಂಟಿದ ಹನಿಯು ನಾನು
ನನ್ನ ಹಿಮಬಿಂದು ಮಾಡಬಂದ
ಶೀತ ಗಾಳಿ ನೀನು
***********************************
ವಿದೇಶಿಗರೇ ದೇವರುಗಳಾಗಿ
ವಿದೇಶಿ ಬಂಡವಾಳವೇ ನಾಡಿಯಾಗಿ
ಲಾಭ ನಷ್ಟಗಳೇ ಮಿಡಿತಗಳಾಗಿರುವ
ಬಹು ರಾಷ್ಟ್ರೀಯ ಕಂಪನಿಗಳಲ್ಲಿ
ಮನುಷ್ಯತ್ವ ಸತ್ತು ನಾರುತಿದೆ
***********************************
ವಾಶಿಂಗ್ ಮಷೀನ್ ನಲ್ಲಿ ಒಗೆದಿರೋ ಬಟ್ಟೆಗೂ
ಟಾರ್ಗೆಟ್ , ಡೆಡ್ ಲೈನ್ ಅಂತ ಯೋಚನೆಮಾಡಿ
ಸುಕ್ಕುಹಿಡಿದಿರೋ ಮನಸಿಗೆ ಅಷ್ಟೇನು ವ್ಯತ್ಯಾಸ ಇಲ್ಲ
ಬೆಳಿಗ್ಗೆ ಆಫೀಸ್ ಗೆ ಹೋಗಬೇಕಾದ್ರೆ
ಬಟ್ಟೆಗೆ ಮಾತ್ರ ಅಲ್ಲ ಮನಸಿಗೂ ಇಸ್ತ್ರಿ ಬೇಕು
***********************************
ಏರಿಳಿತದ ರೈತನ ಬಾಳು
ಒಂದು ಮಹಾನ್ ಸಾಗರ
ಆರ್ಭಟಿಸಿ ಅಪ್ಪಳಿಸುವ ಅಲೆಗಳೇ
ಅವನ ಕಷ್ಟ ಕಾರ್ಪಣ್ಯಗಳು
ನುಣು ಮರಳ ಮೇಲಿನ ತಿಳಿನೀರ
ಹಿತ ಸ್ಪರ್ಶವೇ ಸುಗ್ಗಿಯ ಹಿಗ್ಗು
ಆ ನೀರ ರುಚಿಯೇ ಅವನ
ಬೆವರು ಮತ್ತು ಕಣ್ಣೀರ ರುಚಿ
***********************************
ಹೇಳಲಾಗದ ಅನಿಸಿಕೆಗಳು
ಗೊಂದಲದ ಗಾಳಿಗೆ ಸೇರಿ
ಪರ್ವತಗಳ ಸಾಲಲ್ಲಿ
ಹೊಡೆದಾಡುತಿವೆ
ಹಾನಿ ಆಗದಿದ್ದರೂ
ಆ ಶಬ್ದವೇ ಸಾಕಲ್ಲವೇ
ಚಿತ್ತ ಚಂಚಲಿಸಲು
***********************************
ಮನಸಿನ ಸಾವಿರಾರು ಯಾತನೆಗಳಿಗೆ
ಸೂಕ್ತವಾದ ಮಾತ್ರೆ "ಕಡೆಗಣಿಸುವಿಕೆ"
***********************************
some people set their own path
and walk in life garden
some people walk in path
created by others
creating the path is difficult
but it gives lot of joy
***********************************
ಚುಮು ಚುಮು ಚಳಿಯಲಿ
ಎಳೆ ಬಿಸಿಲಿಗೆ ಮೈಯೊಡ್ಡಿ ನಿಂತಾಗ
ಜಡಿ ಮಳೆಯಲಿ ಮಿಂದೆದ್ದ ಅನುಭವ
ಇಂತಿ,
ಕವಿತಾ ಗೋಪಿಕುಂಟೆ
Subscribe to:
Posts (Atom)