Tuesday, September 3, 2013
Wednesday, July 3, 2013
ನನ್ನ ಕವನ ಸಂಕಲನ "ಮೂಕರಾಗ" ದ ಬಿಡುಗಡೆ ಸಮಾರಂಭದ ಸುತ್ತ
ಗೀತಚೇತನ ಎನ್ನುವ ಪ್ರಕಾಶನವನ್ನು ಹುಟ್ಟಿಹಾಕಿ 30 ಜೂನ್ 2013 ರಂದು ನನ್ನ ಮೊದಲ ಕವನ ಸಂಕಲನ "ಮೂಕರಾಗ" ವನ್ನು ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ನವರು ಬಿಡುಗಡೆ ಮಾಡಿದರು. ಖ್ಯಾತ ಲೇಖಕರಾದ ಡಾ. ಮನು ಬಳಿಗಾರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ವಿಮರ್ಶಕರಾದ ಬೈರಮಂಗಲ ರಾಮೇಗೌಡರು, ಚಲನಚಿತ್ರ ನಿರ್ಮಾಪಕರಾದ ಮುರುಳೀಧರ ಹಾಲಪ್ಪ ಮತ್ತು ಅನಿಕೇತನ ಕನ್ನಡ ಬಳಗದ ಅಧ್ಯಕ್ಷರಾದ ಮಾಯಣ್ಣ ಅವರು ಉಪಸ್ಥಿತರಿದ್ದರು.
Sunday, June 9, 2013
Monday, May 27, 2013
Sunday, May 19, 2013
Wednesday, May 1, 2013
Sunday, April 21, 2013
21/4/2013 ರ ಪ್ರಜಾಪ್ರಗತಿ ಪತ್ರಿಕೆಯಲ್ಲಿ ನನ್ನ ಕವನ " ಸುಗ್ಗಿಯ ಹಿಗ್ಗು "
ಬೇಸಾಯವನೇ ಕುಲಕಸುಬಾಗಿಸಿದ
ಜನಗಳಿಗೆಲ್ಲ ಅನ್ನದಾತರೆಂದು ಕರೆಯುವರು
ರೈತನೇ ದೇಶದ ಬೆನ್ನೆಲುಬೆಂದು
ಮಹಾತ್ಮರೆಲ್ಲಾ ಹೇಳುವರು
ಮಳೆ ಬಿಸಿಲೆನ್ನದೆ
ಚಳಿ ಜ್ವರ ಲೆಕ್ಕಿಸದೆ
ಸೊಂಟಕೆ ಬಟ್ಟೆಯ ಬಿಗಿದು
ನೇಗಿಲ ಹಿಡಿದು ಮುನ್ನುಗ್ಗುವರು
ಕಲ್ಲು ಮುಳ್ಳುಗಳ ಪರಿವೇ ಇಲ್ಲದೆ
ಬರಿಗಾಲ ಪಕೀರನಂತೆ ಹೊಲದಲ್ಲೆಲ್ಲಾ ತಿರುಗುವರು
ಎಷ್ಟೇ ದುಡಿದರು ಎಷ್ಟೇ ದಣಿದರು
ಸದಾ ಹಸನ್ಮುಖಿಗಳಾಗಿರುವರು
ಕಾರ್ಮೋಡವ ಕಂಡು ಬೀಜವ ಬಿತ್ತಿ
ಕುಡಿ ಹೊಡೆದ ಪೈರನ್ನ ಒಡಲಕುಡಿಯಂತೆ ಸಲಹಿ
ಹೊಂಗನಸ ಕಾಣುತ್ತ ಆರು ಮಾಸಗಳ ದೂಡುವರು
ತೆನೆ ಹೊಡೆದು ಬಲಿತಾಗ ಸುಗ್ಗಿಗಾಗಿ ಕಾಯುವರು
ಬೇಸಾಯ ಮನೆ ಮಕ್ಕಳೆಲ್ಲಾ
ಸಾಯಾ ಎಂಬ ಗಾದೆ ಮಾತಂತೆ
ಮಕ್ಕಳಿಂದಿಡಿದು ಮುದುಕರವರೆಗೆ
ಎಲ್ಲರು ಸೇರಿ ದುಡಿಯುವರು
ಕಣ ಬಳಿದು ಹಸನಾಗಿಸಿ
ತೆನೆ ಕೊಯ್ದು ಹಾಸಿ
ದನಕರುಗಳಿಂದ ತೆನೆಯನ್ನು ತುಳಿಸಿ
ತೂರುತ್ತ ಕೇರುತ್ತ ಹಾಡಿ ಕೊಂಡಾಡುವರು
ಧಾನ್ಯದ ರಾಶಿ ಹಾಕಿ ಕಣವನ್ನೆಲ್ಲ ಸಿಂಗರಿಸಿ
ಭೂದೇವಿಗೆ ನಮಸ್ಕರಿಸಿ ಅಷ್ಟದಿಕ್ಕುಗಳಿಗೆ ನೀವಳಿಸಿ
ಸುಗ್ಗಿಯ ಸವಿಯನ್ನು ಹಿಗ್ಗಿ ಹಿಗ್ಗಿ ಸವಿಯುತ
ಧಾನ್ಯಲಕ್ಷ್ಮಿಯನು ಮನೆ ತುಂಬಿಸಿಕೊಳ್ಳುವರು
ಇಂತಿ,
ಕವಿತಾಗೌಡ
ಕವಿತಾಗೌಡ
Wednesday, April 10, 2013
ಮತ್ತೆ ಬಂದಿದೆ ಯುಗಾದಿಯು
ಬರಡಾಗಿ ನಿಂತ ಮರಕೆ
ಮತ್ತೆ ಕಳೆಯ ತುಂಬಲು
ಚಿಗುರೊಡೆದು ಹಸಿರಾಗಿ
ಮತ್ತೆ ಬಂದಿದೆ ಯುಗಾದಿಯು
ಹೊಂಗೆ ಜೇನ ಸಂಭ್ರಮದಿ
ಕೋಗಿಲೆಯ ಹೊಸ ಧ್ವನಿಯಲಿ
ಹೊಸ ವರುಷದ ಹೊಸ ನಾದದಿ
ಮತ್ತೆ ಬಂದಿದೆ ಯುಗಾದಿಯು
ಬಿತ್ತು ಹೊತ್ತು ದಣಿದ ರೈತನಿಗೆ
ಬಿಡುವು ಕೊಡಲೆಂಬಂತೆ
ಹೊಸ ವರುಷದ ಹರುಷವ
ಕೊಂಡು ತಂದಿದೆ ಈ ಯುಗಾದಿಯು
ಬಿರಿದು ಉರಿಯುತಿರುವ
ಮೈ ತಣಿಸಲು
ಎಣ್ಣೆ ಸ್ನಾನದ ನೆಪದಲಿ
ಮತ್ತೆ ಬಂದಿದೆ ಯುಗಾದಿಯು
ತಳಿರು ತೋರಣ ಕಟ್ಟಿ
ಸಿಹಿ ಊರಣದ ಹೊಬ್ಬಟ್ಟನ್ನು ತಟ್ಟಿ
ಬೇವು ಬೆಲ್ಲದ ಜೊತೆಗೆ
ಜೀವನದಿ ಸಿಹಿ ಕಹಿಯ ಸಮನಾಗಿ ಸಂಭ್ರಮಿಸಲು
ಮತ್ತೆ ಬಂದಿದೆ ಯುಗಾದಿಯು
ಮತ್ತೆ ಕಳೆಯ ತುಂಬಲು
ಚಿಗುರೊಡೆದು ಹಸಿರಾಗಿ
ಮತ್ತೆ ಬಂದಿದೆ ಯುಗಾದಿಯು
ಹೊಂಗೆ ಜೇನ ಸಂಭ್ರಮದಿ
ಕೋಗಿಲೆಯ ಹೊಸ ಧ್ವನಿಯಲಿ
ಹೊಸ ವರುಷದ ಹೊಸ ನಾದದಿ
ಮತ್ತೆ ಬಂದಿದೆ ಯುಗಾದಿಯು
ಬಿತ್ತು ಹೊತ್ತು ದಣಿದ ರೈತನಿಗೆ
ಬಿಡುವು ಕೊಡಲೆಂಬಂತೆ
ಹೊಸ ವರುಷದ ಹರುಷವ
ಕೊಂಡು ತಂದಿದೆ ಈ ಯುಗಾದಿಯು
ಬಿರಿದು ಉರಿಯುತಿರುವ
ಮೈ ತಣಿಸಲು
ಎಣ್ಣೆ ಸ್ನಾನದ ನೆಪದಲಿ
ಮತ್ತೆ ಬಂದಿದೆ ಯುಗಾದಿಯು
ತಳಿರು ತೋರಣ ಕಟ್ಟಿ
ಸಿಹಿ ಊರಣದ ಹೊಬ್ಬಟ್ಟನ್ನು ತಟ್ಟಿ
ಬೇವು ಬೆಲ್ಲದ ಜೊತೆಗೆ
ಜೀವನದಿ ಸಿಹಿ ಕಹಿಯ ಸಮನಾಗಿ ಸಂಭ್ರಮಿಸಲು
ಮತ್ತೆ ಬಂದಿದೆ ಯುಗಾದಿಯು
ಇಂತಿ,
ಕವಿತಾಗೌಡ
Sunday, April 7, 2013
ನಾ ಬರೀ ಭ್ರೂಣವಲ್ಲ
ಕರುಳ ಕುಡಿ ಚಿಗುರುತಿಹುದು
ಎಂದು ನೀ ತಿಳಿದಾಗ
ಎಷ್ಟು ಸಂತೋಷ ಪಟ್ಟೆ
ಅದೇ ನಾ ಹೆಣ್ಣೆಂದು ತಿಳಿದಾಗ
ಏಕೆ ಈ ಬೇಕು ಬೇಡಗಳ ತೊಳಲಾಟ
ನಾ ಬರೀ ಭ್ರೂಣವಲ್ಲ
ನಿನ್ನದೇ ಒಂದು ಭಾಗ
ನಿನ್ನುಸಿರಿನ ಉಸಿರು
ನಿನ್ನದೇ ಒಂದು ಕನಸು
ಅದು ನಿನಗೆ ತಿಳಿಯದೆ
ನಾ ನಿನಗೆ ಬೇಡವೋ
ಈ ಪ್ರಪಂಚಕ್ಕೆ ಬೇಡವೋ
ಅದ ನಾನರಿಯೆ
ಆದರೂ ತಿಳಿಯುತಿಹುದು ನನಗೆ
ಅನಿಷ್ಟವೆಂದು ಕಟ್ಟಿರುವ ಹಣೆಪಟ್ಟ
ನಾನೊಂದು ಜೀವ
ನನಗೊಂದು ಮನಸಿದೆ
ಅದಕು ಸಾವಿರ ಕನಸಿದೆ
ಕಣ್ಣಬಿಡುವ ಮುನ್ನವೆ
ಕಳಚಿ ಹಾಕುವ ಮನವೇಕೆ
ಹೆಣ್ಣೆಂಬ ಕಾರಣಕೆ
ಹುಣ್ಣಂತೆ ಕಂಡು
ಹಣ್ಣಂತೆ ಕೊಚ್ಚಿ
ಪ್ರಾಣವ ಹಿಂಡುವ
ಕಲ್ಲು ಹೃದಯವೇಕೆ
ನನ್ನ ಮಿಡಿತವನರಿಯದೆ
ಮಣ್ಣಾಗಿಸುವ ಮುನ್ನ
ನೀ ಕೂಡ ಹೆಣ್ಣಿಂದಲೇ
ಕಣ್ಣ ಬಿಟ್ಟಿರುವೆಯೆಂಬ
ಸತ್ಯವ ಮರೆತೆಯೇಕೆ
ಇಂತಿ,
ಕವಿತಾಗೌಡ
Sunday, March 17, 2013
Sunday, March 3, 2013
ಬರಗಾಲದ ತಾಂಡವ
ಬರಗಾಲ ಬಂದಿಹುದು
ಕೆರೆ ಬತ್ತಿ ಬರಿದಾಗಿಹುದು
ಹೊಲ ಒಣಗಿ ಬಿರಿಯುತಿಹುದು
ಭೂಮಿ ಕಾದು ಸುಡುತಿಹುದು
ಕೈಯಲ್ಲಿ ಕಾಸಿಲ್ಲ
ದನಕರುಗೆ ಮೇವಿಲ್ಲ
ಊರಲ್ಲಿ ಕಳೆ ಇಲ್ಲ
ಪ್ರತಿನಿತ್ಯ ಉಪವಾಸ
ನೀರಿಗೂ ಪರದಾಟ
ಪ್ರಾಣಿಗಳ ಚೀರಾಟ
ನರರ ನರಳಾಟ
ನೂರಾರು ಬೇನೆಗಳು
ಸಾಲು ಸಾಲು ಸಾವುಗಳು
ಮುಗಿಲು ನೋಡೊ ಕಣ್ಣುಗಳು
ಅಸಹಾಯಕ ಮುಖಗಳು
ಊರು ಊರಾಗಿಲ್ಲ ಸ್ಮಶಾನವಾಗಿಹುದು
ಎಲ್ಲೆಲ್ಲು ಸೂತಕದ ಛಾಯೆ ಆವರಿಸಿಹುದು
ದೇಹ ಬೆಂಡಾಗಿಹುದು
ಮನಸು ಬೆಂದೋಗಿಹುದು
ಮಳೆರಾಯ ಕರುಣೆಯಿಟ್ಟು
ನನ್ನೂರಿಗೆ ಬಾ ಇಂದು
ಸೂತಕವ ಕಳೆದು ತುಂಬು ಹೊಸ ಜೀವಕಳೆಯನ್ನು
ಕೊಡು ಎಲ್ಲರಲಿ ಚೈತನ್ಯವನ್ನು
ಇಂತಿ,
ಕವಿತಾ ಗೌಡ
Thursday, February 28, 2013
ಕಡಲತೀರದ ನೀನಿಲ್ಲದ ಪಯಣ
ಮುಸ್ಸಂಜೆ ವೇಳೆಯಲಿ
ಕಡಲ ತೀರದಲಿ
ಬೀಸುವ ತಿಳಿ ಗಾಳಿಯಲಿ
ನೀ ಬಂದು ನನ್ನ ಜೊತೆಯಾದಂತೆ
ಭಾಸವಾಗುತಿದೆ ನನಗಿಂದು
ನುಣುಪಾದ ಮರಳಿನಲಿ
ತಿಳಿ ನೀರ ಸ್ಪರ್ಶದಲಿ
ನೀನಿಟ್ಟ ಹೆಜ್ಜೆಗಳೆ
ನೆನಪಾಗುತಿವೆ ಇಂದು
ಪ್ರತಿ ಹೆಜ್ಜೆಯಲು ಕಾಡುತಿವೆ ಇಂದು
ಕಡಲಲೆಗಳ ಭೋರ್ಗರೆತಕೆ
ನಿನ ಮಾತೆ ನೆನಪಾಗಿದೆ ಇಂದು
ನೀ ಕಟ್ಟಿದ ಮರಳುಗೂಡು
ಕಣ್ಣಿಗೆ ಕಟ್ಟಿದಂತಿದೆ ಇಂದು
ಕಣ್ಣೀರಲ್ಲೆ ಕರಗುತಿದೆ ಇಂದು
ಕಳೆದುಹೋದ ಕ್ಷಣಗಳು
ಆಡಿದಂತ ಮಾತುಗಳು
ಮಾಡಿದಂತ ಆಣೆ ಭಾಷೆಗಳು
ಬರಿ ನೆನಪಾಗಿವೆ ಇಂದು
ಪ್ರತಿಕ್ಷಣವು ಕೊಲ್ಲುತಿವೆ ಇಂದು
ಇಂತಿ,
ಕವಿತಾ ಗೌಡ
Monday, February 11, 2013
Subscribe to:
Posts (Atom)