Tuesday, November 29, 2016
Friday, November 25, 2016
ಜಾಗತೀಕರಣದ ಕರಿನೆರಳು
ಜಾಗತೀಕರಣದ ಜಾಗಟೆ
ಸದ್ದು ಎಲ್ಲೆಲ್ಲೂ ಹರಡಿದೆ
ಬಹುರಾಷ್ಟ್ರೀಯ ಕಂಪನಿಗಳು
ಕಾಳ್ಗೀಚಿನಂತೆ ಹಬ್ಬುತ್ತಿವೆ
ಕೃಷಿ ಮರೆತು ಜಾಣರೆಲ್ಲ
ವಲಸೆ ಬಂದಾಗಿದೆ
ನಗರೀಕರಣ ಸುನಾಮಿಯಂತೆ
ಆವರಿಸುತ್ತಿದೆ
ಏರುತಿದೆ ಜನಸಂಖ್ಯೆ
ಹಾಕುವವರಿಲ್ಲ ಅಂಕೆ
ಕಾಡೆಲ್ಲ ರೋಡಾಗಿ ಕೃಷಿಭೂಮಿ
ಕಾಂಕ್ರೀಟು ಕಾಡಾಗಿದೆ
ಬಿಳಿ ಭಾಷೆ ಸೆರಗಿಡಿದು
ತಾಯಿನುಡಿಯ ನಿರ್ಲಕ್ಷಿಸಿ
ತಮ್ಮತನವ ಮರೆಸಿ ಪಾಶ್ಚ್ಯಾತ್ಯ
ಸಂಸ್ಕೃತಿಯ ಮೆರೆಸುತಿದೆ
ವಿದೇಶಿಗರೇ ದೇವರಾಗಿ
ವಿದೇಶಿಬಂಡವಾಳವೇ ನಾಡಿಯಾಗಿ
ಲಾಭ ನಷ್ಟಗಳೆ ಮಿಡಿತಗಳಾಗಿ
ಮನುಷ್ಯತ್ವವನು ಮರೆಯಾಗಿಸಿದೆ
ಸಂಬಂಧಗಳಿಗೆ ಬೆಲೆಕಟ್ಟಿ
ಹೆತ್ತವರನ್ನು ದೂರ ಸರಿಸಿ
ವೃದ್ದಾಶ್ರಮಗಳನು ಸೃಷ್ಟಿಸಿ
ಅನಾಥರಂತೆ ಬದುಕಿಸುತಿದೆ
ಜಾಗರೂಕ ಮನಗಳಲ್ಲಿ
ತಲ್ಲಣವ ಸೃಷ್ಟಿಸಿ
ಜಾಗತಿಕ ಕರಿನೆರಳು
ಕೇಕೆಹಾಕಿ ನಗುತಲಿದೆ
--ಕವಿತಾ ಗೋಪಿಕುಂಟೆ
ಸದ್ದು ಎಲ್ಲೆಲ್ಲೂ ಹರಡಿದೆ
ಬಹುರಾಷ್ಟ್ರೀಯ ಕಂಪನಿಗಳು
ಕಾಳ್ಗೀಚಿನಂತೆ ಹಬ್ಬುತ್ತಿವೆ
ಕೃಷಿ ಮರೆತು ಜಾಣರೆಲ್ಲ
ವಲಸೆ ಬಂದಾಗಿದೆ
ನಗರೀಕರಣ ಸುನಾಮಿಯಂತೆ
ಆವರಿಸುತ್ತಿದೆ
ಏರುತಿದೆ ಜನಸಂಖ್ಯೆ
ಹಾಕುವವರಿಲ್ಲ ಅಂಕೆ
ಕಾಡೆಲ್ಲ ರೋಡಾಗಿ ಕೃಷಿಭೂಮಿ
ಕಾಂಕ್ರೀಟು ಕಾಡಾಗಿದೆ
ಬಿಳಿ ಭಾಷೆ ಸೆರಗಿಡಿದು
ತಾಯಿನುಡಿಯ ನಿರ್ಲಕ್ಷಿಸಿ
ತಮ್ಮತನವ ಮರೆಸಿ ಪಾಶ್ಚ್ಯಾತ್ಯ
ಸಂಸ್ಕೃತಿಯ ಮೆರೆಸುತಿದೆ
ವಿದೇಶಿಗರೇ ದೇವರಾಗಿ
ವಿದೇಶಿಬಂಡವಾಳವೇ ನಾಡಿಯಾಗಿ
ಲಾಭ ನಷ್ಟಗಳೆ ಮಿಡಿತಗಳಾಗಿ
ಮನುಷ್ಯತ್ವವನು ಮರೆಯಾಗಿಸಿದೆ
ಸಂಬಂಧಗಳಿಗೆ ಬೆಲೆಕಟ್ಟಿ
ಹೆತ್ತವರನ್ನು ದೂರ ಸರಿಸಿ
ವೃದ್ದಾಶ್ರಮಗಳನು ಸೃಷ್ಟಿಸಿ
ಅನಾಥರಂತೆ ಬದುಕಿಸುತಿದೆ
ಜಾಗರೂಕ ಮನಗಳಲ್ಲಿ
ತಲ್ಲಣವ ಸೃಷ್ಟಿಸಿ
ಜಾಗತಿಕ ಕರಿನೆರಳು
ಕೇಕೆಹಾಕಿ ನಗುತಲಿದೆ
--ಕವಿತಾ ಗೋಪಿಕುಂಟೆ
ಕವಿಗೋಷ್ಠಿ
ವಯೋಬೇಧವಿಲ್ಲದೆ
ಕವಿಗಳೆನಿಸಿಕೊಂಡವರ
ಒಂದೆಡೆ ಸೇರಿಸುವುದು ಕವಿಗೋಷ್ಠಿ
ಕವಿತೆರೂಪದಲಿ ತಂದ
ಕಲ್ಪನೆ ಅನುಭವಗಳ ಬಂಡಾರವ
ಜಗತ್ತಿಗೆ ಸಾರುವ ವೇದಿಕೆ ಕವಿಗೋಷ್ಠಿ
ತಪ್ಪು ಒಪ್ಪುಗಳ ಅರಿತು
ಹಿರಿಯರ ಮಾರ್ಗದರ್ಶನ ಪಡೆದು
ಬರೆವ ಹಂಬಲ ತರುವ ಶಕ್ತಿ ಕವಿಗೋಷ್ಠಿ
--ಕವಿತಾ ಗೋಪಿಕುಂಟೆ
Subscribe to:
Posts (Atom)