ಮಂದಿರ ಮಸೀದಿಗಳಲಿ
ಚರ್ಚ್ ಬಸದಿಗಳಲಿ
ಹುಟ್ಟುತ್ತಿತ್ತು
ಜಾತಿಮತ ಪಂತವಿಲ್ಲದ
ಬಡವಬಲ್ಲಿದನೆಂಬ
ಭೇದವಿಲ್ಲದ ನನ್ನ ಕವಿತೆ
ಮನಶಾಂತಿಗಾಗಿ
ಸಮಾಜದ ಒಳಿತಿಗಾಗಿ
ಸಾರುತ್ತಿತ್ತು
ಒಗ್ಗಟ್ಟಿನಲ್ಲಿ ಬಲವಿದೆಯೆಂದು
ಎಲ್ಲರಿಗು ಸುಖವಿದೆಯೆಂದು
ಸ್ವಾರ್ಥ ರಾಜಕೀಯದಲ್ಲಿ
ಅಧಿಕಾರದ ದುರಾಸೆಯಲ್ಲಿ
ಹುಟ್ಟುತಿಹುದು
ಧರ್ಮಜಾತಿ ಪಟ್ಟಿ ಹೊತ್ತು
ಸಮಾಜ ಹೊಡೆದು
ಉರುಳಿಸಲು ನನ್ನ ಕವಿತೆ
ಜನರ ಓಟಿಗಾಗಿ
ಅಧಿಕಾರದ ಸೀಟಿಗಾಗಿ
ತೋರುತಿಹುದು
ಹೊಡೆಯುವುದರಲಿ ಜಾಣ್ಮೆಯಿದೆಯೆಂದು
ಇದರಲಿ ಸ್ವಾರ್ಥಸುಖವಿದೆಯೆಂದು
ಹೊಡೆದ ಇಭ್ಬಾಗದಲಿ
ಐಕ್ಯತೆ ಸಾರುವ ದೊಂಬರಾಟದಲಿ
ಬಿತ್ತುತಿದೆ ದ್ವೇಷಬೀಜ
ಮೊಳೆದು ಗಿಡವಾಗಿ
ಹೆಮ್ಮರವಾದಾಗ ಜಾಣಮೌನ
ವಹಿಸುವುದು ನನ್ನ ಕವಿತೆ
ಧ್ವೇಷ ಕಿಡಿ ಜ್ವಾಲೆಯಲ್ಲಿ
ತನ್ನ ಬೇಳೆ ಬೇಯಿಸಿ
ತೋರುವುದು
ಯುವಭವಿಷ್ಯ ಕಮರಿಸುವುದೇಗೆಂದು
ತನ್ನ ನಾಳೆಗಳ ಹಸನಾಗಿಸುವುದೇಗೆಂದು
ಇಂತಿ,
ಕವಿತಾ ಗೋಪಿಕುಂಟೆ
ಚರ್ಚ್ ಬಸದಿಗಳಲಿ
ಹುಟ್ಟುತ್ತಿತ್ತು
ಜಾತಿಮತ ಪಂತವಿಲ್ಲದ
ಬಡವಬಲ್ಲಿದನೆಂಬ
ಭೇದವಿಲ್ಲದ ನನ್ನ ಕವಿತೆ
ಮನಶಾಂತಿಗಾಗಿ
ಸಮಾಜದ ಒಳಿತಿಗಾಗಿ
ಸಾರುತ್ತಿತ್ತು
ಒಗ್ಗಟ್ಟಿನಲ್ಲಿ ಬಲವಿದೆಯೆಂದು
ಎಲ್ಲರಿಗು ಸುಖವಿದೆಯೆಂದು
ಸ್ವಾರ್ಥ ರಾಜಕೀಯದಲ್ಲಿ
ಅಧಿಕಾರದ ದುರಾಸೆಯಲ್ಲಿ
ಹುಟ್ಟುತಿಹುದು
ಧರ್ಮಜಾತಿ ಪಟ್ಟಿ ಹೊತ್ತು
ಸಮಾಜ ಹೊಡೆದು
ಉರುಳಿಸಲು ನನ್ನ ಕವಿತೆ
ಜನರ ಓಟಿಗಾಗಿ
ಅಧಿಕಾರದ ಸೀಟಿಗಾಗಿ
ತೋರುತಿಹುದು
ಹೊಡೆಯುವುದರಲಿ ಜಾಣ್ಮೆಯಿದೆಯೆಂದು
ಇದರಲಿ ಸ್ವಾರ್ಥಸುಖವಿದೆಯೆಂದು
ಹೊಡೆದ ಇಭ್ಬಾಗದಲಿ
ಐಕ್ಯತೆ ಸಾರುವ ದೊಂಬರಾಟದಲಿ
ಬಿತ್ತುತಿದೆ ದ್ವೇಷಬೀಜ
ಮೊಳೆದು ಗಿಡವಾಗಿ
ಹೆಮ್ಮರವಾದಾಗ ಜಾಣಮೌನ
ವಹಿಸುವುದು ನನ್ನ ಕವಿತೆ
ಧ್ವೇಷ ಕಿಡಿ ಜ್ವಾಲೆಯಲ್ಲಿ
ತನ್ನ ಬೇಳೆ ಬೇಯಿಸಿ
ತೋರುವುದು
ಯುವಭವಿಷ್ಯ ಕಮರಿಸುವುದೇಗೆಂದು
ತನ್ನ ನಾಳೆಗಳ ಹಸನಾಗಿಸುವುದೇಗೆಂದು
ಇಂತಿ,
ಕವಿತಾ ಗೋಪಿಕುಂಟೆ