ನನ್ನ ನೆಚ್ಚಿನ ಲೇಖಕರಲ್ಲಿ ಒಬ್ಬರಾದ ವಸುಧೇಂದ್ರ ಸರ್
ರವರ, ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಸಂದರ್ಶನದಲ್ಲಿದ್ದ ""ಬರವಣಿಗೆ ನನಗೆ
ದೇವರು ನೀಡಿರುವ ಕೌಶಲ. ಬರೆಯದೆ ಹೋದರೆ ನನಗೆ ದೊರೆತ ವರವನ್ನು ಅವಮಾನಿಸಿದಂತೆ.""
ಅನ್ನುವ ಸಾಲಿನಿಂದ ಪ್ರೇರೇಪಿತಗೊಂಡು ಈ ಕೆಳಗಿನ ಕವಿತೆಯನ್ನು ಬರೆದಿದ್ದೇನೆ.
ಅವರ ಮಾತಿನಂತೆ ದೇವರು ನನಗೆ ನೀಡಿರುವ ವರವನ್ನು ಅವಮಾನಿಸದಂತೆ ಉಳಿಸಿಕೊಳ್ಳುವೆ.
ಬಿಡುವಿನ ವೇಳೆಯಲ್ಲಿ ಬರೆಯದೆ, ಬರೆಯುವುದಕ್ಕೊಸ್ಕರ ಬಿಡುವು ಮಾಡಿಕೊಂಡು ಬರೆದು ದೇವರು ಕೊಟ್ಟ ವರವನ್ನ ಮತ್ತಷ್ಟು ಗೌರವಿಸಬೇಕೆಂದಿದ್ದೇನೆ.
ಮೊದಲೆಲ್ಲ ಹುಡುಕುತ್ತಿದ್ದೆ
ನನ್ನೊಳಗಿಹ ಕವಿತೆ
ಆದರೀಗ ಹುಡುಕುತಿಹೆನು
ನನ್ನೊಳಗಿನ ಕವಿತ
ಅವರ ಮಾತಿನಂತೆ ದೇವರು ನನಗೆ ನೀಡಿರುವ ವರವನ್ನು ಅವಮಾನಿಸದಂತೆ ಉಳಿಸಿಕೊಳ್ಳುವೆ.
ಬಿಡುವಿನ ವೇಳೆಯಲ್ಲಿ ಬರೆಯದೆ, ಬರೆಯುವುದಕ್ಕೊಸ್ಕರ ಬಿಡುವು ಮಾಡಿಕೊಂಡು ಬರೆದು ದೇವರು ಕೊಟ್ಟ ವರವನ್ನ ಮತ್ತಷ್ಟು ಗೌರವಿಸಬೇಕೆಂದಿದ್ದೇನೆ.
ಮೊದಲೆಲ್ಲ ಹುಡುಕುತ್ತಿದ್ದೆ
ನನ್ನೊಳಗಿಹ ಕವಿತೆ
ಆದರೀಗ ಹುಡುಕುತಿಹೆನು
ನನ್ನೊಳಗಿನ ಕವಿತ
ಜಂಜಾಟದಿ ಮುಳುಗಿ
ದೇವರ ವರವ ಮರೆತು
ಶೂನ್ಯದೆಡೆ ನಡೆವಾಗ
ಮುತ್ತೊಂದ ಕಂಡು
ತಪ್ಪಿನರಿವಾಗಿ
ನನ್ನೊಳಗೆ ಹುಡುಕುತಿಹೆನು
ದುಗುಡ ದುಮ್ಮಾನಗಳ
ಹೆಕ್ಕಿತೆಗೆದು
ಅರೆಬೆಂದ ಕವಿತೆಗಳ
ಕಾಯಿಸಿ ಹಚ್ಚಾಗಿಸಲು
ಹುಡುಕುತಿಹೆನು
ಸಿಕ್ಕಾಳೆ ಆ
ನನ್ನ ಕವಿತ
ಹುಡುಕುವಳೆ
ಮೆಚ್ಚಿ ಹಚ್ಚಾಗುವ
ಕವಿತೆಗಳ
ಇಂತಿ,
ಕವಿತಾ ಗೋಪಿಕುಂಟೆ
ದೇವರ ವರವ ಮರೆತು
ಶೂನ್ಯದೆಡೆ ನಡೆವಾಗ
ಮುತ್ತೊಂದ ಕಂಡು
ತಪ್ಪಿನರಿವಾಗಿ
ನನ್ನೊಳಗೆ ಹುಡುಕುತಿಹೆನು
ದುಗುಡ ದುಮ್ಮಾನಗಳ
ಹೆಕ್ಕಿತೆಗೆದು
ಅರೆಬೆಂದ ಕವಿತೆಗಳ
ಕಾಯಿಸಿ ಹಚ್ಚಾಗಿಸಲು
ಹುಡುಕುತಿಹೆನು
ಸಿಕ್ಕಾಳೆ ಆ
ನನ್ನ ಕವಿತ
ಹುಡುಕುವಳೆ
ಮೆಚ್ಚಿ ಹಚ್ಚಾಗುವ
ಕವಿತೆಗಳ
ಇಂತಿ,
ಕವಿತಾ ಗೋಪಿಕುಂಟೆ
No comments:
Post a Comment
Note: Only a member of this blog may post a comment.