Friday, December 18, 2015

ಕಾಲನ ತಟ

ಕಾಲನ ತಟದಲಿ
ಸರಸರನೆ ಬಂದೋಗುವ
ನಿಮಿಷಗಳಲೆಗಳ ನೋಡುತಿರೆ
ತನುಮನ ತಣಿವುದು
ಜಗದೊಳಿರುವ ಒಳ್ಳೆಯ ಮನುಜರ
ಕಂಡರೆ ಮನತುಂಬಿ ಬರುವುದು

ಬಡಿದಬ್ಬರಿಸುವ ಘನಘೋರಲೆಗೆ
ಎದೆ ಜಲ್ಲೆನ್ನುವುದು
ಕ್ರೂರಿಗಳಾರ್ಭಟಕೆ
ಭಯವಾವರಿಸುವುದು 

ತಣಿಸುವ ಅಲೆ
ಭಯವಾಗಿಸುವಲೆ
ಎರೆಡೂ ಅಲೆಯೇ

ಒಳ್ಳೆಯ ಆತ್ಮ
ಕೆಟ್ಟ ಆತ್ಮ
ಎರೆಡೂ ಆತ್ಮಗಳೇ

ಪರಮಾತ್ಮನ ಆಟದಿ ದಾಳಗಳಾಗಿ
ಬಂದಪ್ಪಳಿಸುವ ರೀತಿ ಮಾತ್ರವೆ ಬೇರೆ
ಬದುಕುವ ರೀತಿ ಮಾತ್ರವೆ ಬೇರೆ

                                                                    ಇಂತಿ,
                                                                    ಕವಿತಾ ಗೋಪಿಕುಂಟೆ

No comments:

Post a Comment

Note: Only a member of this blog may post a comment.