ಸದಾ ಜನ ಜಾತ್ರೆಯಂತಿದ್ದ ಮನ
ಸುಖಾ ಸುಮ್ಮನೆ ಒಮ್ಮೆಲೆ
ನೀರಸ ಮೌನದಿ
ಸಾಲು ಪರ್ವತಗಳೆಡೆಗೆ ಜಾರಿ ನಿಂತಿದೆ
ಒಬ್ಬಂಟಿಯಾದಾಗ ಧುಮ್ಮಿಕ್ಕುವ
ಕಹಿ ನೆನಪು, ಅನಾಥ ಭಾವಗಳು
ಪರ್ವತಗಳ ಮಧ್ಯೆ ತೊಯ್ದಾಡಿ ಪ್ರತಿಧ್ವನಿಸಿ
ಮತ್ತಷ್ಟು ಮೊಗದೊಷ್ಟು ಕುಗ್ಗಿಸುತಿವೆ ಮನವ
***********************************
ಅರಿವಿನ ಕಡಲ ಸೇರಲು
ಜ್ಞಾನದ ನದಿಯು
ಅಜ್ಞಾನದ ಕಟ್ಟೆಯೊಡೆದು ಹರಿಯಬೇಕು
***********************************
ನಮ್ಮ ಸಮಯದ ಹೂಡಿಕೆ ಗೊತ್ತಾಗುವುದು
ನಾವು ಓದಿದ ಪುಸ್ತಕಗಳ ಸಂಖ್ಯೆ ಮತ್ತು ನಾವು
ಮಾಡಿಕೊಂಡ ಹೊಸ ಸ್ನೇಹಿತರ ಸಂಖ್ಯೆಯಿಂದ.
ಹೂಡಿಕೆ ಸರಿಯೋ ತಪ್ಪೋ ಎಂದು ತಿಳಿಯುವುದು
ಆರಿಸಿಕೊಂಡ ಪುಸ್ತಕ ಮತ್ತು ಸ್ನೇಹಿತರಿಂದ.
***********************************
ಮಾಗಿಯ ಕಾಲದ ಮುಂಜಾವಿನಲಿ
ಗರಿಕೆಗೆ ಅಂಟಿದ ಹನಿಯು ನಾನು
ನನ್ನ ಹಿಮಬಿಂದು ಮಾಡಬಂದ
ಶೀತ ಗಾಳಿ ನೀನು
***********************************
ವಿದೇಶಿಗರೇ ದೇವರುಗಳಾಗಿ
ವಿದೇಶಿ ಬಂಡವಾಳವೇ ನಾಡಿಯಾಗಿ
ಲಾಭ ನಷ್ಟಗಳೇ ಮಿಡಿತಗಳಾಗಿರುವ
ಬಹು ರಾಷ್ಟ್ರೀಯ ಕಂಪನಿಗಳಲ್ಲಿ
ಮನುಷ್ಯತ್ವ ಸತ್ತು ನಾರುತಿದೆ
***********************************
ವಾಶಿಂಗ್ ಮಷೀನ್ ನಲ್ಲಿ ಒಗೆದಿರೋ ಬಟ್ಟೆಗೂ
ಟಾರ್ಗೆಟ್ , ಡೆಡ್ ಲೈನ್ ಅಂತ ಯೋಚನೆಮಾಡಿ
ಸುಕ್ಕುಹಿಡಿದಿರೋ ಮನಸಿಗೆ ಅಷ್ಟೇನು ವ್ಯತ್ಯಾಸ ಇಲ್ಲ
ಬೆಳಿಗ್ಗೆ ಆಫೀಸ್ ಗೆ ಹೋಗಬೇಕಾದ್ರೆ
ಬಟ್ಟೆಗೆ ಮಾತ್ರ ಅಲ್ಲ ಮನಸಿಗೂ ಇಸ್ತ್ರಿ ಬೇಕು
***********************************
ಏರಿಳಿತದ ರೈತನ ಬಾಳು
ಒಂದು ಮಹಾನ್ ಸಾಗರ
ಆರ್ಭಟಿಸಿ ಅಪ್ಪಳಿಸುವ ಅಲೆಗಳೇ
ಅವನ ಕಷ್ಟ ಕಾರ್ಪಣ್ಯಗಳು
ನುಣು ಮರಳ ಮೇಲಿನ ತಿಳಿನೀರ
ಹಿತ ಸ್ಪರ್ಶವೇ ಸುಗ್ಗಿಯ ಹಿಗ್ಗು
ಆ ನೀರ ರುಚಿಯೇ ಅವನ
ಬೆವರು ಮತ್ತು ಕಣ್ಣೀರ ರುಚಿ
***********************************
ಹೇಳಲಾಗದ ಅನಿಸಿಕೆಗಳು
ಗೊಂದಲದ ಗಾಳಿಗೆ ಸೇರಿ
ಪರ್ವತಗಳ ಸಾಲಲ್ಲಿ
ಹೊಡೆದಾಡುತಿವೆ
ಹಾನಿ ಆಗದಿದ್ದರೂ
ಆ ಶಬ್ದವೇ ಸಾಕಲ್ಲವೇ
ಚಿತ್ತ ಚಂಚಲಿಸಲು
***********************************
ಮನಸಿನ ಸಾವಿರಾರು ಯಾತನೆಗಳಿಗೆ
ಸೂಕ್ತವಾದ ಮಾತ್ರೆ "ಕಡೆಗಣಿಸುವಿಕೆ"
***********************************
some people set their own path
and walk in life garden
some people walk in path
created by others
creating the path is difficult
but it gives lot of joy
***********************************
ಚುಮು ಚುಮು ಚಳಿಯಲಿ
ಎಳೆ ಬಿಸಿಲಿಗೆ ಮೈಯೊಡ್ಡಿ ನಿಂತಾಗ
ಜಡಿ ಮಳೆಯಲಿ ಮಿಂದೆದ್ದ ಅನುಭವ
ಇಂತಿ,
ಕವಿತಾ ಗೋಪಿಕುಂಟೆ