ಸತ್ಯಣ್ಣನ ಅಕಾಲಿಕ ಮರಣ
ತಂದಿದೆ ಶಿರಾ ಕ್ಷೇತ್ರದ ಉಪಚುನಾವಣಾ
ಪ್ರಚಾರ ಬಲು ಜೋರು
ಏರಿಸುತಿದೆ ಕಾವು
ನಮ್ಮ ಮತ ನಮ್ಮ ಹಕ್ಕು
ಚಲಾಯಿಸದಿದ್ದರದುವೆ ದೊಡ್ಡ ತಪ್ಪು
ನಮ್ಮದೊಂದು ಮತ
ಆಗಲಿದೆ ಅಭಿವೃದ್ಧಿಯ ಮೂಲ
ಸೀರೆ ಹೆಂಡ ಬದಿಗೆ ಸರಿಸಿ
ಒತ್ತೋಣ ಓಟು
ಮುಟ್ಟದೆಯೇ
ಗಾಂಧಿ ನೋಟು
ಸ್ವಇಚ್ಚೆಯಿಂದ ಮತದಾನ ಮಾಡಿ
ಎಲ್ಲರಿಂದ ಮತದಾನ ಮಾಡಿಸಿ
ಮಳೆಗೆ ಕೆರೆಕುಂಟೆ ತುಂಬಿದಂತೆ
ಓಟಿನಿಂದ ಮತಡಬ್ಬಿ ತುಂಬಿಸಿ
ಸಮರ್ಥರನ್ನು ಆರಿಸೋಣ
ಇಂತಿ ,
ಕವಿತಾ ಗೋಪಿಕುಂಟೆ