Friday, October 30, 2020

ಶಿರಾ ಉಪಚುನಾವಣೆ

 ಸತ್ಯಣ್ಣನ ಅಕಾಲಿಕ ಮರಣ

ತಂದಿದೆ ಶಿರಾ ಕ್ಷೇತ್ರದ ಉಪಚುನಾವಣಾ

ಪ್ರಚಾರ ಬಲು ಜೋರು 

ಏರಿಸುತಿದೆ ಕಾವು


ನಮ್ಮ ಮತ ನಮ್ಮ ಹಕ್ಕು 

ಚಲಾಯಿಸದಿದ್ದರದುವೆ ದೊಡ್ಡ ತಪ್ಪು 

ನಮ್ಮದೊಂದು ಮತ

ಆಗಲಿದೆ ಅಭಿವೃದ್ಧಿಯ ಮೂಲ


ಸೀರೆ ಹೆಂಡ ಬದಿಗೆ ಸರಿಸಿ

ಒತ್ತೋಣ ಓಟು

ಮುಟ್ಟದೆಯೇ 

ಗಾಂಧಿ ನೋಟು


ಸ್ವಇಚ್ಚೆಯಿಂದ ಮತದಾನ ಮಾಡಿ

ಎಲ್ಲರಿಂದ ಮತದಾನ ಮಾಡಿಸಿ

ಮಳೆಗೆ ಕೆರೆಕುಂಟೆ ತುಂಬಿದಂತೆ

ಓಟಿನಿಂದ ಮತಡಬ್ಬಿ ತುಂಬಿಸಿ 

ಸಮರ್ಥರನ್ನು ಆರಿಸೋಣ

                                ಇಂತಿ ,

                                ಕವಿತಾ ಗೋಪಿಕುಂಟೆ

No comments:

Post a Comment

Note: Only a member of this blog may post a comment.