ಕತ್ತಲೆಯ ಕಾರ್ಮೋಡದಿಂದಿದೆ
ಹೊಂಗಿರಣದ ಬೆಳಕು
ಆ ಹೊಂಗಿರಣಕಾಗಿಯೇ ಬರಲಿ
ಕಾರ್ಮೋಡ ಎನ್ನಿ ಬಾಳಲಿ
ಪ್ರತಿ ದುಃಖದ ಹಿಂದಿದೆ
ನಲಿವಿನ ಕ್ಷಣಗಳು
ಆ ನಲಿವಿನ ಕ್ಷಣಕಾಗಿಯೇ ಬರಲಿ
ದುಃಖ ಎನ್ನಿ ಬಾಳಲಿ
ಪ್ರತಿ ಸೋಲಿನ ಹಿಂದಿದೆ
ಗೆಲುವಿನ ಸರದಿಯು
ಆ ಗೆಲುವಿಗಾಗಿಯೇ ಬರಲಿ
ಸೋಲು ಎನ್ನಿ ಬಾಳಲಿ
ಪ್ರತಿ ನೋವಿನ ಹಿಂದಿದೆ
ಪರರ ನೋವನರಿಯುವ ಭಾವವು
ಆ ಅರಿವಿಗಾಗಿಯೇ ಬರಲಿ
ನೋವು ಎನ್ನಿ ಬಾಳಲಿ
ಇಂತಿ
ಕವಿತಾಗೌಡ