Monday, September 25, 2017

ಸದ್ದು

ನೀರಿಗೆ ಜಿಗಿವಾಗ ಬರುವ ಶಬ್ದ
ನೀರಿಂದ ಮೇಲೇಳುವಾಗ ಬರುವುದಿಲ್ಲ
ತಪ್ಪು ಮಾಡುವಾಗ ಆಡಿಕೊಂಡು ಸದ್ದು ಮಾಡುವ ಜನ
ಒಂದೊಳ್ಳೆ ಕೆಲಸ ಮಾಡುವಾಗ ಮಾತಾಡೋದಿಲ್ಲ
ಇದರಿಂದಲೇ ತಿಳಿಯುತ್ತದೆ
ಸದ್ದಿನಿಂದಿರುವ ಉದ್ದೇಶವೇನೆಂದು

                                      --ಕವಿತಾ ಗೋಪಿಕುಂಟೆ

ಓ ಜೀವವೇ

ಓ ಜೀವವೇ
ಖುಷಿಯೆಂದರೆ ನನಗೆ,

ನನ್ನದಲ್ಲದ ಊರಿನಲಿ
ಜನತುಂಬಿದ ಬೀದಿಯಲಿ
ನಮ್ಮದೇ ಭಾಷೆಯಲಿ
ನಿನ್ನನ್ನು ಕೂಗುವುದು

ತುಂತುರು ಮಳೆಯಲಿ
ಬಿಳಿಮರಳ ಬೀಚಿನಲಿ
ನಿನ್ನೆಜ್ಜೆ ಮೇಲೆ
ನನ್ನೆಜ್ಜೆ ಇಡುವುದು

ಬಿದಿರ ಕಾಡಿನಲಿ
ಬೀಸೋ ಗಾಳಿಯಲಿ
ನಿನ್ನನ್ನೆ ಬೆನ್ನಟ್ಟಿ
ಓಡೋಡಿ ಬರುವುದು

ಅವರ ದೇವಾಲಯದಲ್ಲಿ
ಅಲ್ಲಿನ ಸಂಪ್ರದಾಯದಲಿ
ಅವರದೇ ಭಾಷೆಯಲಿ
ನಿನಗಾಗಿ ಬೇಡುವುದು

ಇಷ್ಟೆಲ್ಲಾ ಗಳಿಗೆಗಳ
ಬಚ್ಚಿಟ್ಟು ಕಾಯುತಿರುವೆ
ಬಂದುಬಿಡು ಬಹುಬೇಗ
ನಾನಿರುವ ಊರಿಗೆ

                     --ಕವಿತಾ ಗೋಪಿಕುಂಟೆ

ದಾರ

ಸೂಜಿ ನಾವಾಗಿ
ದಾರ ಬಾಳದಾರಿಯಾದಾಗ
ದಾರಕಾಕುವ ಗಂಟೇ ತವರು

ದಾರದ ಬುಡದಿ ಗಂಟಿಲದಿರೆ
ಹೊಲಿಗೆ ಸಾಧ್ಯವಿಲ್ಲ
ತವರ ಮರೆತ
ಯಾರ ಬಾಳಿಗೂ ಅರ್ಥವಿಲ್ಲ

            --ಕವಿತಾ ಗೋಪಿಕುಂಟೆ