Thursday, October 13, 2016

ತುತ್ತು ಅನ್ನಕ್ಕಾಗಿ

ತಾಯಗರ್ಭದ ಭ್ರೂಣದಿ
ಬೆನ್ನಿಗಂಟುವ ಹಸಿವು
ಉಸಿರು ನಿಂತು ಚಿತೆ
ಏರಿದಾಗಲೇ ಬಿಡುವುದು

ನಮ್ಮಗಳ ಹೋರಾಟ
ದೈನಂದಿನ ಪರದಾಟ
ವಿಲ ವಿಲ ಒದ್ದಾಟ
ತುತ್ತು ಅನ್ನಕ್ಕಾಗಿಯೇ

ವಿಧಿಯಗಾಳಕೆ ಸಿಕ್ಕಿ
ಬಡತನವೆ ಹಾಸಿಗೆ
ಹಸಿವೇ ಹೊದಿಕೆಯಾದಾಗ
ಕಾಡುವುದು ಅನ್ನದ ಕನಸು

ಸ್ಥಾನಮಾನ ಕಾಣದು
ಹಸಿದ ಕಣ್ಣಿಗೆ
ಮನದ ಮಾತು ಕೇಳದು
ಹಸಿದೊಟ್ಟೆಯ ಕೂಗಿಗೆ

ವಿದ್ಯೆ ವಿನಯಗಳ ಮರೆಸಿ
ಮಾನ ಮರ್ಯಾದೆಗಳ ಥಳಿಸಿ
ಕ್ರೌರ್ಯವನು ಮೆರೆಸುವುದು
ಹಸಿವ ನೀಗಿಸುವ
ತುತ್ತು ಅನ್ನಕ್ಕಾಗಿಯೇ

                                         --ಕವಿತಾ ಗೋಪಿಕುಂಟೆ 

No comments:

Post a Comment

Note: Only a member of this blog may post a comment.