Friday, January 29, 2016

ರಾಜಕೀಯ ಕವಿತೆ

ಮಂದಿರ ಮಸೀದಿಗಳಲಿ
ಚರ್ಚ್ ಬಸದಿಗಳಲಿ
ಹುಟ್ಟುತ್ತಿತ್ತು
ಜಾತಿಮತ ಪಂತವಿಲ್ಲದ
ಬಡವಬಲ್ಲಿದನೆಂಬ
ಭೇದವಿಲ್ಲದ ನನ್ನ ಕವಿತೆ

ಮನಶಾಂತಿಗಾಗಿ
ಸಮಾಜದ ಒಳಿತಿಗಾಗಿ
ಸಾರುತ್ತಿತ್ತು
ಒಗ್ಗಟ್ಟಿನಲ್ಲಿ ಬಲವಿದೆಯೆಂದು
ಎಲ್ಲರಿಗು ಸುಖವಿದೆಯೆಂದು

ಸ್ವಾರ್ಥ ರಾಜಕೀಯದಲ್ಲಿ  
ಅಧಿಕಾರದ ದುರಾಸೆಯಲ್ಲಿ
ಹುಟ್ಟುತಿಹುದು 
ಧರ್ಮಜಾತಿ ಪಟ್ಟಿ ಹೊತ್ತು
ಸಮಾಜ ಹೊಡೆದು
ಉರುಳಿಸಲು ನನ್ನ ಕವಿತೆ

ಜನರ ಓಟಿಗಾಗಿ
ಅಧಿಕಾರದ ಸೀಟಿಗಾಗಿ
ತೋರುತಿಹುದು
ಹೊಡೆಯುವುದರಲಿ ಜಾಣ್ಮೆಯಿದೆಯೆಂದು
ಇದರಲಿ ಸ್ವಾರ್ಥಸುಖವಿದೆಯೆಂದು

ಹೊಡೆದ ಇಭ್ಬಾಗದಲಿ
ಐಕ್ಯತೆ ಸಾರುವ ದೊಂಬರಾಟದಲಿ  
ಬಿತ್ತುತಿದೆ  ದ್ವೇಷಬೀಜ
ಮೊಳೆದು ಗಿಡವಾಗಿ
ಹೆಮ್ಮರವಾದಾಗ ಜಾಣಮೌನ
ವಹಿಸುವುದು ನನ್ನ ಕವಿತೆ

ಧ್ವೇಷ ಕಿಡಿ ಜ್ವಾಲೆಯಲ್ಲಿ
ತನ್ನ ಬೇಳೆ ಬೇಯಿಸಿ 
ತೋರುವುದು
ಯುವಭವಿಷ್ಯ ಕಮರಿಸುವುದೇಗೆಂದು 
ತನ್ನ ನಾಳೆಗಳ ಹಸನಾಗಿಸುವುದೇಗೆಂದು

ಇಂತಿ,
ಕವಿತಾ ಗೋಪಿಕುಂಟೆ

1 comment:

  1. ರಾಜಕೀಯ ಪ್ರೇರಿತ ಮತಲಬೀ ದುನಿಯಾ ಈಗ.
    ಅಯ್ಯೋ ಸಾಮರಸ್ಯವದೆಲ್ಲಿ? ಎಲ್ಲಿ?

    ReplyDelete

Note: Only a member of this blog may post a comment.