Tuesday, August 18, 2015

ಜ್ಞಾನವಿಲ್ಲದ ಮನ

ಜ್ಞಾನದ ಸ್ನಾನವಿಲ್ಲದ ಮನಸಿಟ್ಟು
ನೂರುಬಾರಿ ಜಳಕ ಮಾಡಿ
ಸುಗಂಧದ್ರವ್ಯಗಳ ಲೇಪಿಸಿದರೇನು
ಮನದ ದುರ್ಗಂಧ ಹೋದೀತೇ

ಚಾಡಿ ಹೇಳುವ ನಾಲಿಗೆಗೆ
ಉಪ್ಪಾಕಿ ತಿಕ್ಕಿದರೇನು
ಅದರ ಚಟವ ಬಿಟ್ಟೀತೇ

ಕೆಸರಲಾಡಿದ ಎಮ್ಮೆಗೆ
ಮೈತೊಳೆದರೆ ಸಾಕು
ದುರ್ಗಂಧ ಹೋಗುವುದು
ಹಲ್ಲು ತಿಕ್ಕದಿದ್ದರೂ ಬಾಯಿ
ವಾಸನೆಬಾರದು

ಛೀ ಛೀ ಎಮ್ಮೆಗಿಂತ ಕೇಡು
ದುರುಳರ ಬಾಳು

                                           ಇಂತಿ,
                                           ಕವಿತಾ ಗೋಪಿಕುಂಟೆ

No comments:

Post a Comment

Note: Only a member of this blog may post a comment.