Tuesday, May 16, 2017

ಸೋಜಿಗ

ಬಂದು ಬಳಿ ನಿಲ್ಲದೆ
ಮಂಡಿಯೂರಿ ಕೇಳದೆ
ಸೆಳೆತದೆಳೆಯ
ಬೀಸಿ ಸೆಳೆದು

ಅಪರಾಧವಿಲ್ಲದೆ
ಆಪಾದಿಸಿ
ಅಪಾರವಾಗಿ
ಕಾಡಿ ಸೆಳೆದು

ಸೂಚನೆಯೇ ಇಲ್ಲದೆ
ಸೋಜಿಗದಂತೆ ಸೆಳೆದು
ಕದ್ದೊಯ್ದನಲ್ಲ ಮನವ
ಕಾಣದೆನ್ನ ಕೃಷ್ಣನು

                          --ಕವಿತಾ ಗೋಪಿಕುಂಟೆ 

No comments:

Post a Comment

Note: Only a member of this blog may post a comment.