Tuesday, September 3, 2013

ನಾನು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ನನ್ನ ಪುಸ್ತಕ "ಮೂಕರಾಗ" ದ ಬಗ್ಗೆ

ನಾನು ಕೆಲಸ ಮಾಡುತ್ತಿರುವುದು ಬಹುರಾಷ್ಟ್ರೀಯ ಕಂಪನಿಯಲ್ಲಿ. ಎಚ್ ಆರ್ ಗೆ ನನ್ನ ಪುಸ್ತಕದ ಬಗ್ಗೆ ಹೇಳಿದಾಗ ಪುಸ್ತಕದ ಬಗ್ಗೆ ಮಾಹಿತಿ ಪಡೆದು ಕಂಪನಿಯ ನಿಯತಕಾಲಿಕ ದಲ್ಲಿ ಪ್ರಕಟಿಸಿದ್ದಾರೆ. ಬರೀ ಹಿಂದಿ ಮತ್ತು ಅಂಗ್ಲ ಭಾಷೆಯೇ  ರಾರಾಜಿಸುವಲ್ಲಿ ನಮ್ಮ ಕನ್ನಡ ನೋಡಿ ಬಹಳ ಕುಶಿ ಆಯಿತು.




Wednesday, July 3, 2013

ನನ್ನ ಕವನ ಸಂಕಲನ "ಮೂಕರಾಗ" ದ ಬಿಡುಗಡೆ ಸಮಾರಂಭದ ಸುತ್ತ

ಗೀತಚೇತನ ಎನ್ನುವ ಪ್ರಕಾಶನವನ್ನು ಹುಟ್ಟಿಹಾಕಿ 30 ಜೂನ್ 2013 ರಂದು ನನ್ನ ಮೊದಲ ಕವನ ಸಂಕಲನ "ಮೂಕರಾಗ" ವನ್ನು ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ನವರು ಬಿಡುಗಡೆ ಮಾಡಿದರು. ಖ್ಯಾತ ಲೇಖಕರಾದ ಡಾ. ಮನು ಬಳಿಗಾರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ವಿಮರ್ಶಕರಾದ ಬೈರಮಂಗಲ ರಾಮೇಗೌಡರು, ಚಲನಚಿತ್ರ ನಿರ್ಮಾಪಕರಾದ ಮುರುಳೀಧರ ಹಾಲಪ್ಪ ಮತ್ತು ಅನಿಕೇತನ ಕನ್ನಡ ಬಳಗದ ಅಧ್ಯಕ್ಷರಾದ ಮಾಯಣ್ಣ ಅವರು ಉಪಸ್ಥಿತರಿದ್ದರು.

02/07/2013 ರ ಪ್ರಜಾವಾಣಿ ಪತ್ರಿಕೆಯಲ್ಲಿ
02/07/2013 ರ ವಿಜಯಕರ್ನಾಟಕ ಪತ್ರಿಕೆಯಲ್ಲಿ
01/07/2013 ರ ಕನ್ನಡಪ್ರಭ ಪತ್ರಿಕೆಯಲ್ಲಿ
01/07/2013 ರ ಉದಯವಾಣಿ ಪತ್ರಿಕೆಯಲ್ಲಿ
01/07/2013 ರ ವಿಜಯವಾಣಿ ಪತ್ರಿಕೆಯಲ್ಲಿ







Sunday, April 21, 2013

21/4/2013 ರ ಪ್ರಜಾಪ್ರಗತಿ ಪತ್ರಿಕೆಯಲ್ಲಿ ನನ್ನ ಕವನ " ಸುಗ್ಗಿಯ ಹಿಗ್ಗು "


ಬೇಸಾಯವನೇ  ಕುಲಕಸುಬಾಗಿಸಿದ
ಜನಗಳಿಗೆಲ್ಲ ಅನ್ನದಾತರೆಂದು ಕರೆಯುವರು
ರೈತನೇ ದೇಶದ ಬೆನ್ನೆಲುಬೆಂದು
ಮಹಾತ್ಮರೆಲ್ಲಾ ಹೇಳುವರು

ಮಳೆ ಬಿಸಿಲೆನ್ನದೆ
ಚಳಿ ಜ್ವರ ಲೆಕ್ಕಿಸದೆ
ಸೊಂಟಕೆ ಬಟ್ಟೆಯ ಬಿಗಿದು
ನೇಗಿಲ ಹಿಡಿದು ಮುನ್ನುಗ್ಗುವರು

ಕಲ್ಲು ಮುಳ್ಳುಗಳ ಪರಿವೇ ಇಲ್ಲದೆ
ಬರಿಗಾಲ ಪಕೀರನಂತೆ ಹೊಲದಲ್ಲೆಲ್ಲಾ  ತಿರುಗುವರು
ಎಷ್ಟೇ ದುಡಿದರು ಎಷ್ಟೇ ದಣಿದರು
ಸದಾ ಹಸನ್ಮುಖಿಗಳಾಗಿರುವರು

ಕಾರ್ಮೋಡವ ಕಂಡು ಬೀಜವ ಬಿತ್ತಿ
ಕುಡಿ ಹೊಡೆದ ಪೈರನ್ನ ಒಡಲಕುಡಿಯಂತೆ ಸಲಹಿ
ಹೊಂಗನಸ ಕಾಣುತ್ತ ಆರು ಮಾಸಗಳ ದೂಡುವರು
ತೆನೆ ಹೊಡೆದು ಬಲಿತಾಗ ಸುಗ್ಗಿಗಾಗಿ ಕಾಯುವರು

ಬೇಸಾಯ ಮನೆ ಮಕ್ಕಳೆಲ್ಲಾ
ಸಾಯಾ ಎಂಬ ಗಾದೆ ಮಾತಂತೆ
ಮಕ್ಕಳಿಂದಿಡಿದು  ಮುದುಕರವರೆಗೆ
ಎಲ್ಲರು ಸೇರಿ ದುಡಿಯುವರು

ಕಣ ಬಳಿದು ಹಸನಾಗಿಸಿ
ತೆನೆ ಕೊಯ್ದು ಹಾಸಿ
ದನಕರುಗಳಿಂದ ತೆನೆಯನ್ನು ತುಳಿಸಿ
ತೂರುತ್ತ ಕೇರುತ್ತ ಹಾಡಿ ಕೊಂಡಾಡುವರು

ಧಾನ್ಯದ ರಾಶಿ ಹಾಕಿ ಕಣವನ್ನೆಲ್ಲ ಸಿಂಗರಿಸಿ
ಭೂದೇವಿಗೆ ನಮಸ್ಕರಿಸಿ ಅಷ್ಟದಿಕ್ಕುಗಳಿಗೆ ನೀವಳಿಸಿ
ಸುಗ್ಗಿಯ ಸವಿಯನ್ನು ಹಿಗ್ಗಿ ಹಿಗ್ಗಿ ಸವಿಯುತ
ಧಾನ್ಯಲಕ್ಷ್ಮಿಯನು ಮನೆ ತುಂಬಿಸಿಕೊಳ್ಳುವರು 


 ಇಂತಿ,
         ಕವಿತಾಗೌಡ